ಪ್ರತಿ ದಿನ ಯಾವುದೊ ಒಂದು ಯೋಚನೆಯ ಹಿಂದೆ, ಗುರಿಯ ಹಿಂದೆ, ಆಸೆಯ ಹಿಂದೆ ಈ ನಮ್ಮ ಮನಸ್ಸು ಓಡುತ್ತಿರುತ್ತದೆ. ಆದರೆ ಆ ಗುರಿಯನ್ನು ನಾವು ಮುತ್ತುವೆವೋ ಇಲ್ಲವೋ ಎಂಬ ಭಯ ಮಾತ್ರ ನಮ್ಮನ್ನು ಯಾವತ್ತು ಬೆಂಬಿಡದೆ ಕಾಡುತಿರುತ್ತದೆ. ಅದು ಸಿಕ್ಕಾಗ ಸಂತೋಷ, ಇಲ್ಲದಿದ್ದರೆ ದುಕ್ಕ. ಅದು ಸಿಕ್ಕಗೆ ಇನ್ನೊಂದು, ಇನ್ನೊಂದು ಸಿಕ್ಕರೆ ಮತ್ತೊಂದು ಹೀಗೆ ಒಂದು ಅಜ್ಞಾತ ಗುರಿಯತ್ತ ನಮ್ಮ ಜೀವನ ಹೋಗಲು ಬಿಡಬಾರದು. ನಮ್ಮ ಸುತ್ತ ಮುತ್ತ ಲಿನ ಎಸ್ಟೋ ವಿಸ್ಮಯಗಳ ಬಗ್ಗೆ ನಾವು ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ದೇವರು ನಮಗೆ ಕೊಟ್ಟಿರುವ ಈ ಸುಂದರ ಪರಿಸರ, ಜಗತ್ತು, ಕುಟುಂಬ, ಈ ಹುಟ್ಟು, ಈ ಗಾಳಿ, ನೀರು ಇನ್ನು ಎಸ್ಟೋ ಅಸಂಕ್ಯಾತ ವಸ್ತುಗಳನ್ನು ನಾವು ಉಪಯೋಗಿಸುತ್ತೇವೆ. ಯಾವುದೇ ಒಂದು ಕೃತಜ್ಞ ಭಾವ ಇಲ್ಲದೆ ಆದರೆ , ಒಂದು ಕ್ಷಣ ಯೋಚಿಸಿ ಉಸಿರಾಡುವಾಗ ದೇವರು ಕೊಟ್ಟ ಗಾಳಿಗೆ ಕ್ರುತಗ್ನರಾಗಿ , ಊಟ ಮಾಡುವಾಗ ಅನ್ನ ಕೊಟ್ಟ ದೇವರಿಗೆ, ಬೆಳೆದ ರೈತರಿಗೆ ಕೃತಜ್ಞತೆ ಸಲ್ಲಿಸಿ ಆಗ ಅದಕ್ಕೆ ಸಿಗುವ ಬೆಲೆ ಹೆಚ್ಚಾಗುತ್ತದೆ ,ಪೂಜ್ಯ ಭಾವ ಬರುತ್ತದೆ. ಈ ಮನೋಭಾವ ಬೆಳೆಸಿ , ಉಳಿಸಿದರೆ ಎಲ್ಲರಿಗು ಒಳಿತು.